ಪೋಸ್ಟ್‌ಗಳು

2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬದುಕು ಗೆಲ್ಲಿಸುವ ಸಿಮರೂಬ....

ಇಮೇಜ್
ಧರೆಗಿಳಿದ ಸ್ವರ್ಗಸೀಮೆಯ ಸಸ್ಯ....  ಕ್ಯಾನ್ಸರ್ ಮುಕ್ತ ನಾಡು ಕಟ್ಟುವ-ಡಾ.ಜೋಷಿ ದಂಪತಿ ಕನಸು  ಆತನ ಹೆಸರು ನಚಿಕೇತ್. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿಗೆ ಸೇರ್ಪಡೆಯಾಗಿದ್ದ. ಆಗ ಆತನಿಗೆ ಕಾಣಿಸಿಕೊಂಡಿದ್ದು ಮಾರಕ ಕಾಯಿಲೆ. `ಇದು ಬ್ಲಡ್ ಕ್ಯಾನ್ಸರ್, ತಕ್ಷಣ ಚಿಕಿತ್ಸೆ ಆರಂಭಿಸಿ' ಎಂದು ವೈದ್ಯರು ಸಲಹೆ ಮಾಡುತ್ತಾರೆ. ಕುಟುಂಬ ಕಣ್ಣೀರಾಗುತ್ತದೆ, ಬೆಳೆದು ನಿಂತ ಮಗನ ಭವಿಷ್ಯವೇ ಮುಗಿದು ಹೋದಂತೆ ಕುಸಿದು ಕುಳಿತು ಬಿಡುತ್ತದೆ. ಧೃತಿಗೆಡದ ಅಪ್ಪ-ಅಮ್ಮ ಮೊದಲ ಕಿಮೋಥೆರಪಿಯನ್ನೂ ಮಾಡಿಸುತ್ತಾರೆ. ಆ ಸಮಯದಲ್ಲೇ ಅವರಿಗೆ ಸಿಕ್ಕ ಮಾಹಿತಿ-ಸಿಮರೂಬಚಿಕಿತ್ಸೆ. ಬೇರೇನನ್ನೂ ಯೋಚಿಸದೇ ಚಿಕಿತ್ಸೆ ಶುರು ಮಾಡಿಕೊಳ್ಳುತ್ತಾರೆ. ಆರು ತಿಂಗಳು ನಿರಂತರ ಚಿಕಿತ್ಸೆ. ಬಳಿಕ ಕ್ಲಿನಿಕಲ್ ಟೆಸ್ಟ್; ಕ್ಯಾನ್ಸರ್ ಇರುವ ಸಣ್ಣ ಕುರುಹೂ ಕಾಣಿಸುವುದಿಲ್ಲ! ಸಿಮರೂಬ ಗಿಡ (ಲಕ್ಷ್ಮೀತರು)ದೊಂದಿಗೆ ಡಾ. ಜೋಷಿ ದಂಪತಿ   ಆಕೆಯ ಹೆಸರು ಸುಲೇಖಾ. ಇಬ್ಬರು ಮಕ್ಕಳ ತಾಯಿ. ಆಕೆಗೆ ಕಾಣಿಸಿಕೊಂಡಿದ್ದು ಮೆಲನೋಮಾ. ಇದೊಂದು ಚರ್ಮರೋಗ. ಕ್ಯಾನ್ಸರ್ ನಲ್ಲಿಯೇ ಅತ್ಯಂತ ಮಾರಕವಿದು ಎನ್ನುತ್ತಾರೆ ವೈದ್ಯರು. ಸುಲೇಖಾ ಪತ್ನಿಗೆ ತಜ್ಞ ವೈದ್ಯರು ಹೇಳಿದ್ದು ಇಷ್ಟು; ಬದುಕಿದ್ದರೆ ಮೂರು ಅಥವಾ ನಾಲ್ಕು ತಿಂಗಳು ಮಾತ್ರ! ಆದರೆ ಕಿದ್ವಾಯಿ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರು ಸುಲೇಖಾಗೆ ಮಾಡಿದ ಸಲಹೆ- ಸಿಮರೂಬ...

ಅವಳಿಗಳ ಮೋಹಕೆ ಕರಗಿದ ಪರ್ವತಗಳು!

ಇಮೇಜ್
ಅದು ಡೆತ್ ಝೋನ್! ಪರ್ವತಾರೋಹಿಗಳು ಹಾಗೆಂದು ಅದನ್ನು ಕರೆಯುತ್ತಾರೆ. ಯಾವುದೇ ಪರ್ವತವಿರಲಿ, 26000 ಅಡಿಗಿಂತ ಆಚೆಗಿನ ಶಿಖರಾಗ್ರವೆಂದರೆ  ಯಾವತ್ತೂ ಸಾವಿನ ಸಹವಾಸ. ಎಂತಹ ಗಟ್ಟಿಗುಂಡಿಗೆ, ಕಬ್ಬಿಣದ ದೇಹವೂ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ. ಹನಿ ಆಮ್ಲಜನಕ ಸಿಕ್ಕರೂ ಸಾಕೆಂಬ ಸ್ಥಿತಿ. ಕಣ್ಣಿಗೆ ನಿದ್ದೆ ಹತ್ತುವುದಿಲ್ಲ. ತಿಂದ ಆಹಾರ ಜೀರ್ಣವಾಗುವುದಿಲ್ಲ. ಶ್ವಾಶಕೋಶವೇ ಊದಿಕೊಳ್ಳಲು ಶುರುವಾಗುತ್ತದೆ. ಯಾವುದೂ ನಿಮ್ಮ ಹತೋಟಿಗೆ ಸಿಕ್ಕುವುದಿಲ್ಲ. ಕೈ ಚಾಚಿದರೆ ನೀಲಾಕಾಶವೇ ಎಟಕುವಂತಿರುತ್ತದೆ, ಆದರೆ ಜೀವ ಹಿಡಿಹಿಡಿ. ಜೀವನದ ಅಂತಿಮ ಕ್ಷಣ ಕಣ್ಣಂಚಿಗೇ ಬಂದು ಕುಂತಂತೆ, ಅದು ಇನ್ನೇನು ಜಾರಿಯೇ ಬಿಟ್ಟಿತು ಎಂಬೋ ಭಾವ! ಅದೊಂದೇ ಅಲ್ಲ, ಒಂದು ಶಿಖರದ ತುತ್ತತುದಿಗೇ ಏರಿ ಬಿಡಬೇಕೆಂದರೆ ನೇರಾ ನೇರ ಏಣಿ ಇಟ್ಟು ಹತ್ತುವಂತಾದ್ದಲ್ಲ. ಹತ್ತಾರು ಕಣಿವೆಗಳನ್ನು ದಾಟಬೇಕು, ಕಣ್ಣ ಮುಂದೇ ಕರಗಿ ಹೋಗುವ ನೀರ್ಗಲ್ಲುಗಳ ಬೆಟ್ಟಗಳ ನಡುವಲೊಂದು ಏಣಿ ಇಟ್ಟು ಮುಂದೆ ಕ್ರಮಿಸಬೇಕು. ಕೆಳಗೆ ಪ್ರಪಾತ, ಮೇಲಂತೂ ಕಣ್ಣೆತ್ತಿ ನೋಡುವ ಹಾಗೇ ಇಲ್ಲ. ಒಂದರ್ಥದಲ್ಲಿ ಅದೂ ಡೆತ್ ಝೋನ್! ಅಂತಹ ಒಂದು ಪರ್ವತ ತುಂಗವನ್ನೇರಿ, ಕೊರಕಲುಗಳನ್ನು ದಾಟಿ ಬಂದು ನೋಡಿ, ಬದುಕು ಧನ್ಯವೆನ್ನುತ್ತದೆ. ಆದರೆ ಮತ್ತೆ ಮತ್ತೆ ಅಂತಹ ಡೆತ್ ಝೋನ್ಗಳನ್ನೇ ಕೆಣಕಿ ಬರುವುದಕ್ಕೆ ಎಂತಹ ಗುಂಡಿಗೆ ಬೇಕು ಹೇಳಿ? ಹಾಗೆ ಬೃಹತ್ ಹಿಮದ ಬುದ್ಭುದಗಳನ್ನು ಮೆಟ್ಟಿ, ನೂರಾರು ನೀ...
ಇಮೇಜ್

ಪ್ರಕೃತಿ ನೀಡುವ ಪ್ರತಿ ಹನಿಗೂ ಬೊಗಸೆಯೊಡ್ಡುವ ವಿಜ್ಞಾನಿ..!

ಇಮೇಜ್
ಪರಿಶುದ್ಧ ನೀರು , ಗಾಳಿ , ಶುಭ್ರ ವಾತಾವರಣ ಮತ್ತು ಪರಿಶುದ್ಧ ಮನಸ್ಸು ಇವುಗಳ ಬ ಗ್ಗೆ ಯೋ ಚಿಸುವುದೇ ಕ್ಲೀಷೆ ಅನ್ನಿಸುವಂತಹ ದಿನಗಳಿವು. ಕೆರೆಯನ್ನೇ ಮುಚ್ಚಿ ಮನೆಗಳನ್ನು ನಿ ರ್ಮಿ ಸುವ , ಬೆಟ್ಟವನ್ನೇ ಕಡಿದು ಬಂಗಲೆ ಕಟ್ಟುವವರ ನಡುವೆ ಇಂಥವರೂ ಇದ್ದಾರೆಯೇ ಎಂಬ ಅಚ್ಚರಿ ಕಾಡುತ್ತದೆ. ಯಾವ ಘೊಷಣೆಯೂ ಇಲ್ಲದೆ ಒಂದು ಸುಸ್ಥಿರ ಬದುಕಿಗೆ ಬೇಕಾದ ಎ ಲ್ಲವನ್ನೂ ಅಳವಡಿಸಿಕೊಂಡು , ಆಸ್ವಾದಿಸುತ್ತ ಬದುಕುವವರೂ ನಮ್ಮ ನಡುವೆ ಇದ್ದಾರೆ ಎಂಬುದಕ್ಕೆ ಸಾಕ್ಷಿ ಈ ವಿಜ್ಞಾನಿ. ಇವರ ಮನೆ , ಮನೆ ಕಟ್ಟಿಸಬೇಕೆನ್ನುವವರಿಗೊಂದು ಮಾದರಿ. ಒಬ್ಬ ಮನುಷ್ಯ ಪ್ರಕೃತಿಯನ್ನು ನಂಬುತ್ತಾ ಅದರೊಂದಿಗೇ ಲೀನವಾಗಿ ಹೇಗೆ ಜೀವಿಸಬಹುದು ಎಂಬುದಕ್ಕೆ ಈ ವಿಜ್ಞಾನಿಯ ಬದುಕೇ ಪಾಠ. *** ವಿಜ್ಞಾನಿ ಶ್ರೀ ಎ.ಆರ್.ಶಿವಕುಮಾರ್ ಒಂದೇ ಒಂದು ಹನಿ ನೀರು ಅವರ ಮನೆಯಿಂದ ಆಚೆ ಹೋ ಗುವುದಿಲ್ಲ. ಜಲಮಂಡಳಿಯ ಸಂಪರ್ಕವೂ  ಅವರ ಮನೆಗೆ   ಇಲ್ಲ. ಪ್ಲಾಸ್ಟಿಕ್ ಬಿಟ್ಟರೆ ಒಂದು ಸಣ್ಣ ಕಸ , ವೇಸ್ಟ್ ಪೇಪರ್ ಕೂಡ ಮನೆಯಿಂದ ಆಚೆ ಹಾಕುವುದಿಲ್ಲ. ಅವರು ಬಳ ಸೋದು ಕೇವಲ ಶೇ. 25 ಬೆಸ್ಕಾಂ ವಿದ್ಯುತ್. ಉಳಿದಿದ್ದೆಲ್ಲ ಸೂರ್ಯನ ಬೆಳಕೇ. ಕುಡಿಯುವ ನೀರಿನ ಸಂಸ್ಕರಣೆಗೆ ದುಬಾರಿ ಮಷಿನ್ ಇಲ್ಲ. ಬೆಳಕೂ ಅಷ್ಟೇ ; ದಿನದ ಯಾವುದೇ ಹೊತ್ತಿನಲ್ಲಿ ಮನೆಯ ಪ್ರತಿ ಮೂಲೆಯಲ್ಲೂ ಅದರ ತೋ ರಣ , ಬೆಳದಿಂಗಳು ಕೂಡ. ಅವರೇ ಟೊಂಕಕಟ್ಟಿ ಕಟ್ಟಿದ ಮನೆಗೆ ಈಗ ಬರೋ ಬ್ಬರಿ ಇಪ್ಪತ್ತು ವರ್ಷ. ...

ಜಾಜಿ ದಂಡೆಗಳ ಕಟ್ಟಿದವಳು...

ಇಮೇಜ್
ಆವತ್ತು ಅಮ್ಮ ಜಾಜಿ ಹೂವುಗಳನ್ನು ಕೊಯ್ಯಲು ಬೆಳಗಾತವೇ ಎದ್ದಿದ್ದಳು. ಎಂಟು-ಒಂಭತ್ತು ಗುಡ್ಡೆ ಜಾಜಿ ಗಿಡಗಳಲ್ಲಿ ವಿಪರೀತ ಹೂವು ಬಿಟ್ಟಿದ್ದವು. ಅಷ್ಟನ್ನೂ ಕೊಯ್ಯಲು ತಾಸುಗಟ್ಟಳೆ ಸಮಯ ಬೇಕಿತ್ತು. ರಾತ್ರಿಯೆಲ್ಲ ಪಿರಪಿರ ಅಂತ ಬರುತ್ತಿದ್ದ ಮಳೆ ಬೆಳಗಾತಾದರೂ ಅದೇ ಆಲಾಪನೆಯನ್ನು ಮುಂದುವರಿಸಿತ್ತು. ಬೆಳಕು ಹರಿಯುವುದಕ್ಕೂ ಮುಂಚೆಗೇ ಹೂವು ಕೊಯ್ಯುವುದಕ್ಕೆಂದು ಪೈಪೋಟಿ ಮಾಡುವಂತಿರಲಿಲ್ಲ. ತಾಸು ಎರಡು ಕಳೆದಮೇಲೇ ಮಿಟ್ಟಿಗಳು ಬಲಿತುಕೊಳ್ಳುತ್ತಿದ್ದವು. ಅದಕ್ಕೂ ಮುಂಚೆ ಕೊಯ್ಯಲು ಹೊಂಟರೆ ಮಿಟ್ಟಿಮಿಟ್ಟಿಮಿಟ್ಟಿ. ಪುಟ್ಪುಟಾಣಿ ಎಲೆಗಳ ನಡುವೆ ಅವಿತುಕೊಂಡು ಅಣಕಿಸುತ್ತಿದ್ದವು. ಅದಕ್ಕೆಂದೇ ಅಮ್ಮ ಬೆಳಗಿನ ತಿಂಡಿ-ಚಾ ಎಲ್ಲ ಮುಗಿಸಿಬಿಟ್ಟಿದ್ದಳು. ಮಳೆ ನೀರಿನಲ್ಲೇ ಕೂತ್ಕಂಡು, ಬೂದಿಗಳನ್ನು ಉಜ್ಜಿ ಉಜ್ಜಿ ಪಾತ್ರೆಗಳನ್ನೆಲ್ಲ ತೊಳೆದು ಹಾಕಿದ್ದಳು. ನಾ ಕಾಲೇಜಿಗೆ ಹೋಗೋದ್ರೊಳಗೆ ಒಂದಿಷ್ಟು ಜಾಜಿ ಹೂ ಕೊಯ್ದು ಅವನ್ನು ಕಟ್ಟಿನೂ ಕೊಡೋದು ಅವಳ ದಿನನಿತ್ಯದ ಕೆಲಸವಾಗಿತ್ತು. ಒಂಭತ್ತು ಗಂಟೆಗಳೊಳಗೆ ಎರಡು ಮೂರು ಸಾವಿರ ಹೂಗಳನ್ನು ಕೊಯ್ದು ಅವನ್ನು ಬಾಳೆಬಳ್ಳಿಯಲ್ಲಿ ಪೋಣಿಸಿ ಪೋಣಿಸಿ ಒಪ್ಪ ಮಾಡಿ ಕೊಟ್ಟರೆ ಅದನ್ನು ಲ್ಯಾಸ್ ನಾಯ್ಕರ ಅಂಗಡಿಯಲ್ಲಿಟ್ಟು ಕಾಲೇಜಿಗೆ ಹೋಗ್ತಿದ್ದೆ.  with marimaga ಉದ್ದನೆಯ ಕೊಡೆಯನ್ನು ಕತ್ತಿನ ಮಧ್ಯೆ ಇಟ್ಟುಕೊಂಡು ಒಂದು ಕೈಯಲ್ಲಿ ಬಿಂದಿಗೆ ಇಟ್ಟುಕೊಂಡು ಸುಮಾರು ಎರಡು ಸಾವಿರ ಜಾಜಿಗಳನ್ನು ಆವತ್ತವಳ...

ಮದುಮಗಳು ರಂಗಕ್ಕೇರುವ ಮುನ್ನ....

ಇಮೇಜ್

ಜಿ.ಎಸ್.ಶಿವರುದ್ರಪ್ಪ ಪತ್ನಿ ರುದ್ರಾಣಿ ಅವರೊಂದಿಗೆ ಒಂದೂವರೆ ತಾಸು....

ಇಮೇಜ್