ಪೋಸ್ಟ್‌ಗಳು

ಜೂನ್ 23, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತಿಂಗಳ ಬೆಳಕಿನಲ್ಲಿ ಅಮ್ಮ ಕೊಟ್ಟ ಜಾಜಿದಂಡೆ ಘಮಘಮ

ಇಮೇಜ್
- ಕೋ . ಶಿವಾನಂದ ಕಾರಂತ ( ನನ್ನ ಗುರುಗಳಾದ ಶಿವಾನಂದ ಕಾರಂತರು ಸಾಹಿತಿಗಳು, ಕಥೆಗಾರರು. ಒಳ್ಳೆಯ ಮಾತುಗಾರರು. ಅವರ ನೆನಪಿನ ಶಕ್ತಿ ಅಪಾರ. ನನ್ನ ಎಸ್.ಎಸ್.ಎಲ್,ಸಿ ವರೆಗಿನ ಓದಿನಲ್ಲಿ ಕಾರಂತರು ನನಗೆ ಸಮಾಜಶಾಸ್ತ್ರ ಪಾಠ ಮಾಡುತ್ತಿದ್ದರು. ಅವರು ಪಾಠ ಮಾಡುವ ಶೈಲಿ ಭಿನ್ನ. ಪ್ರತಿ ಕ್ಲಾಸಿನಲ್ಲಿ ಕಥೆಗಳನ್ನೇ ಹೇಳುತ್ತ ಮನಸ್ಸಿಗೆ ಮುಟ್ಟುವ ಹಾಗೆ ಹೇಳುತ್ತಿದ್ದರು. ಅವರು ಕೊಟ್ಟ ನೋಟ್ಸ್ ಬರೆದುಕೊಳ್ಳುವುದೆಂದರೆ ನನಗೆ ಇನ್ನಿಲ್ಲದ ಹುಚ್ಚು. ಅದು ಅತ್ಯಂತ ಸ್ವಾರಸ್ಯಕರವಾಗಿರುತ್ತಿತ್ತು. ಅದು ಕೇವಲ ಪುಸ್ತಕದ ಬದನೆಕಾಯಿ ಆಗಿರುತ್ತಿರಲಿಲ್ಲ. ಪಾಠಗಳನ್ನು ಅವರು ತಮ್ಮದೇ ಶೈಲಿಯಲ್ಲಿ ಬರೆದಿರುತ್ತಿದ್ದರು. ಅಂತಹ ನೋಟ್ಸ್ ನಾನು ಆಗಾಗ ಓದುತ್ತ ಕೂತಿರುತ್ತಿದ್ದುದೇ ಹೆಚ್ಚು. ಅವರು ಕೊಟ್ಟ ನೋಟ್ಸ್ ಅನ್ನು ಬಹಳ ವರ್ಷ ಇಟ್ಟುಕೊಳ್ಳುತ್ತಿದ್ದೆ. ಅಲ್ಲಿಂದದ ಮಗ್ಗುಲು ಬದಲಿಸಿ ನಾನು ಪತ್ರಿಕೋದ್ಯಮದ ದಾರಿ ಹಿಡಿದೆ. ನನಗೆ ಅಕ್ಷರದ ಮೋಹ ಹತ್ತಿಕೊಂಡಿದ್ದರೆ ಅದರಲ್ಲಿ ಮೊದಲ ಪಾಲು ಕಾರಂತ ಮೇಷ್ಟರಿಗೆ ಸಲ್ಲಬೇಕು. ನಾನೇನಾದರೂ ಒಂದು ಪುಸ್ತಕ ಬಿಡುಗಡೆ ಮಾಡಿದರೆ ಅದರ ಒಂದು ಪ್ರತಿಯನ್ನು ಮೇಷ್ಟ್ರರಿಗೆ ಹೋಗಿ ಕೊಡದೇ ಇದ್ದರೆ ನೆಮ್ಮದಿ ಇಲ್ಲ. ಈ ಬಾರಿ ನಾನು ಆ ಕೆಲಸವನ್ನು ತಡವಾಗಿ ಮಾಡಿದೆ. ಆದರೆ ಅಮ್ಮ ಕೊಟ್ಟ ಜಾಜಿ ದಂಡೆ ಯನ್ನು ಅವರ ಮಡಿಲಿಗಿಟ್ಟ ಕೆಲವೇ ದಿನಗಳಲ್ಲಿ ಅದರ ವಿಮರ್ಶೆಯನ್ನೂ ಕುಂದಾಪುರ ಸ್ಥಳೀಯ ಹಾಗೂ ಜನಪ್ರಿಯ ಪತ್ರಿಕೆ ಕುಂದಪ್ರಭ...