ಕದ ತೆರೆದ ಆಕಾಶ -ಎರಡು ಪ್ರಮುಖ ವಿಮರ್ಶೆಗಳು...

ಕಳೆದ ನವೆಂಬರ್ ನಲ್ಲಿ ಬಿಡುಗಡೆಯಾದ ನನ್ನ ಕಥಾ ಸಂಕಲನ "ಕದ ತೆರೆದ ಆಕಾಶ" ಕೃತಿಯ ಬಗ್ಗೆ ಪತ್ರಕರ್ತ ಹಾಗೂ ಕಥೆಗಾರರೂ ಆದ ಡಾ. ಜಗದೀಶ್ ಕೊಪ್ಪ ಮತ್ತು ಡಾ.ವೆಂಕಟರಮಣ ಗೌಡ ಅವರು ಬರೆದಿರುವ ಎರಡು ಪ್ರಮುಖ ವಿಮರ್ಶೆಗಳು ಇಲ್ಲಿವೆ.....

ಮಂಜುನಾಥ್ ಚಾಂದ್ ರವರ ಚಂದನೆಯ ಕಥೆಗಳು....

-ಡಾ.ಜಗದೀಶ್ ಕೊಪ್ಪ, ಹುಬ್ಬಳ್ಳಿ

ನಮ್ಮ ನಡುವಿನ ಸೂಕ್ಷ್ಮ ಸಂವೇದನೆಯ ಪತ್ರಕರ್ತ ಹಾಗೂ ಕಥೆಗಾರ ಮಂಜುನಾಥ್ ಚಾಂದ್ ರವರ ಪ್ರಥಮ ಕಥಾ ಸಂಕಲನವಾದ “ ಕದ ತೆರೆದ ಆಕಾಶ” ಕೃತಿಯು ಹಲವುಕಾರಣಕ್ಕಾಗಿ ವಿಶಿಷ್ಟ ಕಥಾ ಸಂಕಲನವಾಗಿದೆಕುದುರೆಗಿಂತ ಅದರ ಲದ್ದಿ ಬಿರುಸು ಎನ್ನುವ ಗಾದೆಯಂತೆ ಇವೊತ್ತಿನ ಪತ್ರಿಕೋದ್ಯಮದಲ್ಲಿ ಸುದ್ದಿಗಿಂತ ಸದ್ದು ಮಾಡಿದ ಮತ್ತುಮಾಡುತ್ತಿರುವ ಪತ್ರಕರ್ತರೆ ಹೆಚ್ಚುಆದರೆಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಮತ್ತು ದೃಶ್ಯ ಮಾಧ್ಯಮದಲ್ಲಿ ಸೇವೆ ಸಲ್ಲಿಸಿರುವ ಚಾಂದ್ ಸದಾ ಎಲೆಮರೆಯ ಕಾಯಿಯಂತೆತುಂಬಿದ ಕೊಡದಂತೆ ಬದುಕಿದವರುಅವರ  ವ್ಯಕ್ತಿತ್ವದ ಗುಣಗಳು   ಕಥಾ ಸಂಕಲದಲ್ಲಿ ಪ್ರತಿಬಿಂಬಿತವಾಗಿವೆ.

ಪತ್ರಕರ್ತನಾದವನಿಗೆ ಬರೆವಣಿಗೆ ಎಂಬುವುದು ವರವೂ ಹೌದುಶಾಪವೂ ಹೌದುಏಕೆಂದರೆಅವನು ಏನೇ ವಿಷಯವಿದ್ದರೂ ಬರೆದು ಬಿಸಾಡಬಲ್ಲ ಅಕ್ಷರ ಬ್ರಹ್ಮಆದರೆಅವರಬರೆವಣಿಗೆಯಲ್ಲಿ ಯಾವುದೇ ಜೀವಂತಿಕೆಯಾಗಲಿಲವಲವಿಕೆಯನ್ನಾಗಲಿ ಕಾಣುವುದು ಕಷ್ಟ ವಿಷಯದಲ್ಲಿ ಪಿ.ಲಂಕೇಶ್ ಮತ್ತು ರವಿಬೆಳೆಗೆರೆ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿಎರಡಲ್ಲೂ ಅಕ್ಷರಗಳಿಗೆ ಜೀವ ತುಂಬಿದವರಲ್ಲಿ ಪ್ರಮುಖರು ಎಂದು ವಿಶೇಷವಾಗಿ ನಾವು ಹೆಸರಿಸಬಹುದುಅಂತಹ ಪರಂಪರೆಯ ವಾರಸುದಾರರಂತೆ ಕಾಣುವ ಮಂಜುನಾಥ್ ಚಾಂದ್ರವರ ಕಥೆಗಳಲ್ಲಿ ತಾವು ಹುಟ್ಟಿ ಬಂದ ಕಡಲ ತಡಿಯ ತಲ್ಲಣಗಳುಪಲ್ಲಟಗೊಳ್ಳುತ್ತಿರುವ ಸಾಂಸ್ಕತಿಕ ಚಹರೆಗಳುನಶಿಸುತ್ತಿರುವ ಮನುಷ್ಯ ಸಂಬಂಧಗಳು ಓದುಗರ ಎದೆಯ ಕದವನ್ನುತಟ್ಟುತ್ತವೆ.

ಇತ್ತೀಚಿಗಿನ ದಿನಗಳಲ್ಲಿ ತಮ್ಮ ವಿಶಿಷ್ಟ ಹಾಗೂ ಸೂಕ್ಷ್ಮ ಸಂವೇದನೆಯ ಕಥೆಗಳ ಮೂಲಕ ಕರ್ನಾಟಕದ  ಕರಾವಳಿ ಪ್ರದೇಶದಲ್ಲಿ ಕಾಸರಗೂಡಿನ ಹೆಣ್ಣು ಮಗಳು ಅನುಪಮಾ ಪ್ರಸಾದ್ತಮ್ಮ “ದೂರತೀರ” ಸಂಕಲನದಿಂದ ಮತ್ತು ಮಂಜುನಾಥ್ ಚಾಂದ್ “ಕದ ತೆರೆದ ಆಕಾಶ” ಸಂಕಲನದ ಮೂಲಕ  ಕನ್ನಡ ಕಥಾ ಜಗತ್ತು ಕುತೂಹಲದಿಂದ ಗಮನಿಸಲೇ ಬೇಕಾದಪ್ರತಿಭಾವಂತರು ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಚಾಂದ್ ರವರು  ಕಥಾ ಸಂಕಲನದಲ್ಲಿ  ಕೇವಲ ಒಂಬತ್ತು ಕಥೆಗಳಿವೆಅವರೆಂದೂ ಖಯಾಲಿಗಾಗಿ ಕತೆ ಬರೆದವರಲ್ಲ ಹಾಗೂ ಬರೆಯುವವರಲ್ಲ ಎಂಬುದನ್ನು ಇಲ್ಲಿನ ಪ್ರತಿ ಕತೆಗಳುಸಾಬೀತು ಪಡಿಸಿವೆಏಕೆಂದರೆಕಳೆದ ಒಂಬತ್ತು ವರ್ಷಗಳಲ್ಲಿ ಅವರು ಬರೆದದ್ದು ಕೇವಲ ಒಂಬತ್ತೇ ಕತೆಗಳುವರ್ಷವೊಂದಕ್ಕೆ ಒಂಬತ್ತು ಕಥಾ ಸಂಕಲನಗಳನ್ನು ಹೊರ ತಂದು ಮೀಸೆತಿರುವುವ ಪತ್ರಕರ್ತರ ನಡುವೆ ಚಾಂದ್ ಮುಖ್ಯವಾಗುವುದು  ಕಾರಣಕ್ಕೆಅವರ ಕಥೆಗಳಲ್ಲಿ ನಗರ ಮತ್ತು ನಾಗರೀಕ ಜಗತ್ತಿನ ಅಮಾನವೀಯ ಮತ್ತು ಭಾವಶೂನ್ಯ ಬದುಕುಕುರಿತಂತೆ ಒಂದೆರಡು ಕತೆಗಳಿದ್ದರೂ ಸಹ ಉಳಿದ ಕಥೆಗಳು ತಾವು ಹುಟ್ಟಿ ಬೆಳೆದ ಕುಂದಾಪುರದ ಪರಿಸರದ  ಸುತ್ತ ಮುತ್ತಲಿನ ಕತೆಗಳಾಗಿವೆಜೊತೆಗೆ ನಾವು ವೈದೇಹಿಯವರಕಥೆಗಳಲ್ಲಿ ಓದಿದ್ದ ಕುಂದಾಪುರದ ಸುಂದರ ಕನ್ನಡ ಭಾಷೆಯ ಬನಿಯನ್ನು ಚಾಂದ್ ರವರ ಕಥೆಗಳಲ್ಲಿಯೂ ಸಹ ಸವಿಯಬಹುದು.



ನಮ್ಮ ನಡುವಿನ ಸೂಕ್ಷ್ಮ ಸಂವೇದನೆಯ ಪತ್ರಕರ್ತ ಹಾಗೂ ಕಥೆಗಾರ ಮಂಜುನಾಥ್ ಚಾಂದ್ ರವರ ಪ್ರಥಮ ಕಥಾ ಸಂಕಲನವಾದ “ ಕದ ತೆರೆದ ಆಕಾಶ” ಕೃತಿಯು ಹಲವುಕಾರಣಕ್ಕಾಗಿ ವಿಶಿಷ್ಟ ಕಥಾ ಸಂಕಲನವಾಗಿದೆಕುದುರೆಗಿಂತ ಅದರ ಲದ್ದಿ ಬಿರುಸು ಎನ್ನುವ ಗಾದೆಯಂತೆ ಇವೊತ್ತಿನ ಪತ್ರಿಕೋದ್ಯಮದಲ್ಲಿ ಸುದ್ದಿಗಿಂತ ಸದ್ದು ಮಾಡಿದ ಮತ್ತುಮಾಡುತ್ತಿರುವ ಪತ್ರಕರ್ತರೆ ಹೆಚ್ಚುಆದರೆಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಮತ್ತು ದೃಶ್ಯ ಮಾಧ್ಯಮದಲ್ಲಿ ಸೇವೆ ಸಲ್ಲಿಸಿರುವ ಚಾಂದ್ ಸದಾ ಎಲೆಮರೆಯ ಕಾಯಿಯಂತೆತುಂಬಿದ ಕೊಡದಂತೆ ಬದುಕಿದವರುಅವರ  ವ್ಯಕ್ತಿತ್ವದ ಗುಣಗಳು   ಕಥಾ ಸಂಕಲ£ದಲ್ಲಿ ಪ್ರತಿಬಿಂಬಿತವಾಗಿವೆ.

ಪತ್ರಕರ್ತನಾದವನಿಗೆ ಬರೆವಣಿಗೆ ಎಂಬುವುದು ವರವೂ ಹೌದುಶಾಪವೂ ಹೌದುಏಕೆಂದರೆಅವನು ಏನೇ ವಿಷಯವಿದ್ದರೂ ಬರೆದು ಬಿಸಾಡಬಲ್ಲ ಅಕ್ಷರ ಬ್ರಹ್ಮಆದರೆಅವರಬರೆವಣಿಗೆಯಲ್ಲಿ ಯಾವುದೇ ಜೀವಂತಿಕೆಯಾಗಲಿಲವಲವಿಕೆಯನ್ನಾಗಲಿ ಕಾಣುವುದು ಕಷ್ಟ ವಿಷಯದಲ್ಲಿ ಪಿ.ಲಂಕೇಶ್ ಮತ್ತು ರವಿಬೆಳೆಗೆರೆ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿಎರಡಲ್ಲೂ ಅಕ್ಷರಗಳಿಗೆ ಜೀವ ತುಂಬಿದವರಲ್ಲಿ ಪ್ರಮುಖರು ಎಂದು ವಿಶೇಷವಾಗಿ ನಾವು ಹೆಸರಿಸಬಹುದುಅಂತಹ ಪರಂಪರೆಯ ವಾರಸುದಾರರಂತೆ ಕಾಣುವ ಮಂಜುನಾಥ್ ಚಾಂದ್ರವರ ಕಥೆಗಳಲ್ಲಿ ತಾವು ಹುಟ್ಟಿ ಬಂದ ಕಡಲ ತಡಿಯ ತಲ್ಲಣಗಳುಪಲ್ಲಟಗೊಳ್ಳುತ್ತಿರುವ ಸಾಂಸ್ಕತಿಕ ಚಹರೆಗಳುನಶಿಸುತ್ತಿರುವ ಮನುಷ್ಯ ಸಂಬಂಧಗಳು ಓದುಗರ ಎದೆಯ ಕದವನ್ನುತಟ್ಟುತ್ತವೆ.

ಇತ್ತೀಚಿಗಿನ ದಿನಗಳಲ್ಲಿ ತಮ್ಮ ವಿಶಿಷ್ಟ ಹಾಗೂ ಸೂಕ್ಷ್ಮ ಸಂವೇದನೆಯ ಕಥೆಗಳ ಮೂಲಕ ಕರ್ನಾಟಕದ  ಕರಾವಳಿ ಪ್ರದೇಶದಲ್ಲಿ ಕಾಸರಗೂಡಿನ ಹೆಣ್ಣು ಮಗಳು ಅನುಪಮಾ ಪ್ರಸಾದ್ತಮ್ಮ “ದೂರತೀರ” ಸಂಕಲನದಿಂದ ಮತ್ತು ಮಂಜುನಾಥ್ ಚಾಂದ್ “ಕದ ತೆರೆದ ಆಕಾಶ” ಸಂಕಲನದ ಮೂಲಕ  ಕನ್ನಡ ಕಥಾ ಜಗತ್ತು ಕುತೂಹಲದಿಂದ ಗಮನಿಸಲೇ ಬೇಕಾದಪ್ರತಿಭಾವಂತರು ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಚಾಂದ್ ರವರು  ಕಥಾ ಸಂಕಲನದಲ್ಲಿ  ಕೇವಲ ಒಂಬತ್ತು ಕಥೆಗಳಿವೆಅವರೆಂದೂ ಖಯಾಲಿಗಾಗಿ ಕತೆ ಬರೆದವರಲ್ಲ ಹಾಗೂ ಬರೆಯುವವರಲ್ಲ ಎಂಬುದನ್ನು ಇಲ್ಲಿನ ಪ್ರತಿ ಕತೆಗಳುಸಾಬೀತು ಪಡಿಸಿವೆಏಕೆಂದರೆಕಳೆದ ಒಂಬತ್ತು ವರ್ಷಗಳಲ್ಲಿ ಅವರು ಬರೆದದ್ದು ಕೇವಲ ಒಂಬತ್ತೇ ಕತೆಗಳುವರ್ಷವೊಂದಕ್ಕೆ ಒಂಬತ್ತು ಕಥಾ ಸಂಕಲನಗಳನ್ನು ಹೊರ ತಂದು ಮೀಸೆತಿರುವುವ ಪತ್ರಕರ್ತರ ನಡುವೆ ಚಾಂದ್ ಮುಖ್ಯವಾಗುವುದು  ಕಾರಣಕ್ಕೆಅವರ ಕಥೆಗಳಲ್ಲಿ ನಗರ ಮತ್ತು ನಾಗರೀಕ ಜಗತ್ತಿನ ಅಮಾನವೀಯ ಮತ್ತು ಭಾವಶೂನ್ಯ ಬದುಕುಕುರಿತಂತೆ ಒಂದೆರಡು ಕತೆಗಳಿದ್ದರೂ ಸಹ ಉಳಿದ ಕಥೆಗಳು ತಾವು ಹುಟ್ಟಿ ಬೆಳೆದ ಕುಂದಾಪುರದ ಪರಿಸರದ  ಸುತ್ತ ಮುತ್ತಲಿನ ಕತೆಗಳಾಗಿವೆಜೊತೆಗೆ ನಾವು ವೈದೇಹಿ ಅವರ ಕಥೆಗಳಲ್ಲಿ ಓದಿದ್ದ ಕುಂದಾಪುರದ ಸುಂದರ ಕನ್ನಡ ಭಾಷೆಯ ಬನಿಯನ್ನು ಚಾಂದ್ ರವರ ಕಥೆಗಳಲ್ಲಿಯೂ ಸಹ ಸವಿಯಬಹುದು.

ನಗರದ ಬದುಕಿನ ಕಥೆಗಳಿಗಿಂತ ಹೆಚ್ಚಾಗಿ ತಮ್ಮ ಪರಿಸರ ಕಥೆಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿರುವ ಚಾಂದ್ ರವರ ನಿರೂಪಣೆ ಮತ್ತು ಕಥೆಗಳ ಪಾತ್ರಗಳಿಗೆ ಬಳಸಿರುವಭಾಷೆಯಲ್ಲಿ ಕವಿಯೊಬ್ಬನ ಪ್ರತಿಭೆ ಅನಾವರಣಗೊಂಡಿದೆ ಸಂಕಲನದ ತಿಮಿರಸವೆದ ಹಾದಿಯ ಉಸಿರುಹೊಳೆ ದಂಡೆಯ ಆಚೆಸಂತೆಯಿಂದ ಬಂದವನುಊರಿಗೆ ಬಂದದೇವರು ಕಥೆಗಳು ಗಮನ ಸೆಳೆಯುತ್ತವೆಜೊತೆಗೆ ಓದುಗರ ಮನದಲ್ಲಿ ಬಹುಕಾಲ ನಿಲ್ಲುತ್ತವೆ.


ಜಾಗತೀರಣವೆಂಬುದು ಸದ್ದಿಲ್ಲದೆಅದೃಶ್ಯ ರೂಪದಲ್ಲಿ ನಮ್ಮನ್ನ ಹಿಂಬಾಲಿಸಿಕೊಂಡು ಬರುತ್ತಿರುವ  ಬೆಂಬಿಡದ ಭೂತ. ನಮಗರಿವಾಗದಂತೆ ಅದು ನಮ್ಮನ್ನು ತಬ್ಬಿಕೊಂಡು  ಹೊಸಕಿ ಹಾಕುತ್ತಿರುವ ವರ್ತಮಾನದ ದುರಂತಗಳು ಚಾಂದ್ ರವರ ಕಥೆಗಳಲ್ಲಿ ರೂಪಕದ ಭಾಷೆಯ ಮೂಲಕ  ಪರಿಣಾಮಕಾರಿಯಾಗಿ ವ್ಯಕ್ತವಾಗಿವೆನಾವು  ಹುಟ್ಟಿ ಬೆಳೆದು ಓಡಾಡಿದ ನೆಲವೆಂಬುದು,  ಈಗ  ನಮ್ಮದೆರು  ಆದುನಿಕತೆಯ ಕಾಡ್ಗಿಚ್ಚಿಗೆ ಸಿಲುಕಿಇತ್ತ ಒಣಗಲಾರದ,  ಅತ್ತ ಬೇರು ಬಿಡಲಾರದ ಅರೆ ಬೆಂದ ಹಸಿರು ಮರದಂತಾಗಿದೆಅಂತಹ ನೋವಿನ,ಸಂಕಟದ ಕ್ಷಣಗಳನ್ನು ಚಾಂದ್ ತಮ್ಮ ಕಥೆಗಳ ಪಾತ್ರಗಳ ಮೂಲಕ ಸಶಕ್ತವಾಗಿ ಅಭಿವ್ಯಕ್ತಿಗೊಳಿಸಿದ್ದಾರೆ.  ಜೊತೆಗೆ ಅವರ ಮುಂದಿನ ಕಥೆಗಳ ಕುರಿತು ನಮ್ಮಲ್ಲಿ ಆಸೆ ಮೂಡಿಸಿದ್ದಾರೆ.





ಚಾಂದ್ ಕಥೆಗಳು: ಹೊಸ ಕಾಲವನ್ನು ಕಾಣುವ ಬಿಂದು


-ಡಾ.ವೆಂಕಟರಮಣ ಗೌಡ, ಅಂಕೋಲ, 


ತೀವ್ರ ತಲ್ಲಣದ ಮುಂದೆ ನಮ್ಮೊಳಗಿನ ಮನುಷ್ಯನ ಗುರುತು ಹಿಡಿಯಲಾರದೆ ನಿಂತವನು ಭಾಷಣವನ್ನಷ್ಟೇ ಮಾಡಬಲ್ಲ.ಮಾನುಷ ಚಹರೆಗಳ ಮೃದುತ್ವ ಮತ್ತು ಒರಟುತನವೆರಡನ್ನೂ ಗ್ರಹಿಸಿದವನು ಮಾತ್ರವೇ ಈ ಜಗತ್ತಿನ ತಲ್ಲಣ ಮತ್ತು ಮುಗ್ಧ ತನ್ಮಯತೆಯ ಇದಿರಿನಲ್ಲಿ ಮಾತಿಲ್ಲದೆ ನಿರುತ್ತರಿಯಂತೆ ನಿಲ್ಲುತ್ತಾನೆ. ಮೊದಲನೆಯವನದು ವರದಿಗಾರಿಕೆ; ಎರಡನೆಯವನದು ಕಥೆಗಾರಿಕೆ. ಪತ್ರಕರ್ತ ಮಂಜುನಾಥ್ ಚಾಂದ್ ಅವರ ಕಥೆಗಳು ಫಲಿಸುವುದು, ನಮ್ಮ ಸುತ್ತಲಿನ ಚಲನೆಗಳನ್ನು ಕಾಣುವ ಮತ್ತು ಕಂಡಿರಿಸುವ ಬಗೆಯಲ್ಲಿನ ಮೀರುವಿಕೆ ಹಲವು ದಿಕ್ಕುಗಳಿಂದ, ಹಲವು ನೆಲೆಗಳಿಂದ ಕ್ರಮಿಸುತ್ತ, ನಿಜದ ರೂಹಿನೊಳಗೆ ಪ್ರಾಣ ಪ್ರತಿಷ್ಠೆ ಮಾಡುವುದೆಂಬುದರ ನಿರೂಪಗಳಾಗುವ ಮೂಲಕ.
“ಕದ ತೆರೆದ ಆಕಾಶ” ಸಂಕಲನದಲ್ಲಿ 2005ರಿಂದ ಚಾಂದ್ ಅವರು ಬರೆದ ಒಂಬತ್ತು ಕಥೆಗಳಿವೆ. ಈ ಹತ್ತು ವರ್ಷಗಳಲ್ಲಿ ಒಂಬತ್ತೇ ಕಥೆಗಳು ಎಂಬುದು ಚಾಂದ್ ಅವರ ಸಂಯಮಕ್ಕೆ ಮಾತ್ರವಲ್ಲ, ಪರವಶವಾಗದ ನೋಡುವಿಕೆಗೂ ಸಾಕ್ಷಿ. ಪತ್ರಕರ್ತನ ವೃತ್ತಿಯ ಮಧ್ಯೆ ಪುರುಸೊತ್ತಾದಾಗ ಹವ್ಯಾಸದಂತೆ ಬರೆದ ಕಥೆಗಳಲ್ಲ ಇವು. ಬದಲಾಗಿ, ಕಥನದ ಗಾಂಭೀರ್ಯಕ್ಕೆ ಒಪ್ಪಿಸಿಕೊಂಡು ಹಂಗಿಲ್ಲದ ಹಾದಿಗಳಲ್ಲಿ ನಡೆಯುತ್ತ ಕೇಳಿಸಿಕೊಂಡದ್ದರ ಮಾರ್ನುಡಿಯಂತಿವೆ. ಈ ಕಥೆಗಳ ಓದಿನಲ್ಲಿ ಸಿಗುವ ಜಗತ್ತು ನಮ್ಮೊಳಗಿನ ಹೊಳೆಗಳಿಗೆ ಸಮುದ್ರದ ಅಗಾಧತೆಯನ್ನು ಕಲಿಸುವ ಮತ್ತು ನಮ್ಮೊಳಗಿನ ಸಮುದ್ರವನ್ನು ಹೊಳೆಗಳ ಕಡೆಗೆ ನಡೆಸುವ ಬೆರಗನ್ನು ಧರಿಸಿದ್ದಾಗಿದೆ.
ಸುಮ್ಮನೆ ಒಮ್ಮೆ ಈ ಕಥೆಗಳ ಹೆಸರು ಗಮನಿಸಿದರೆ, ಹೊರಳುವಿಕೆಯನ್ನು, ಅಯನವನ್ನು, ಅಂಥ ತುಡಿತವನ್ನು ಅವು ಸೂಚಿಸುತ್ತಿರುವುದು ಗೊತ್ತಾಗುತ್ತದೆ. ‘ಸಂತೆಯಿಂದ ಬಂದವನು’, ‘ಹೊಳೆ ದಂಡೆಯ ಆಚೆ’, ‘ಗೋಡೆಗಳನು ದಾಟಿ’, ‘ಊರಿಗೆ ಬಂದ ದೇವರು’ ಹೀಗೆ. ಇನ್ನೂ ಸೂಕ್ಷ್ಮವಾಗಿ ಅದು ತಾಕಲಾಟ. ಪ್ರಾದೇಶಿಕ ಎಂಬುದಕ್ಕಿಂತ ಮಿಗಿಲಾಗಿ ಮನಸ್ಸಿನೊಳಗಿನ ಸಂಘರ್ಷ. ಮೇಲ್ನೋಟಕ್ಕೆ, ಆಡುನುಡಿಯೂ ಸೇರಿ ಒಂದು ಪ್ರಾದೇಶಿಕ ಶರೀರವುಳ್ಳದ್ದಾಗಿ ಕಾಣುವ ಈ ಕಥೆಗಳು ಆಳದಲ್ಲಿ ಅದನ್ನು ಮೀರುವ ತಹತಹವನ್ನೇ ಉಸಿರಾಡುತ್ತಿವೆ. ಆ ತಹತಹ ಮೂಲವಾದ ಪ್ರಯಾಣದ ಕೊನೆ ಕೂಡ ಕೊನೆಗಾಣದ ಕದನದ ಹತಾಶೆಯೊಂದಿಗೇ ಮಡುಗಟ್ಟುವುದರಲ್ಲಿ ಈ ಕಥೆಗಳಿಗೆ ಒಂದು ತೆರನಾದ ಅವಿರತತೆಯು ಒದಗಿದೆ. ನಾನು ಈ ಮಾತು ಹೇಳುತ್ತಿರುವುದು ‘ತಿಮಿರ’, ‘ಸಂತೆಯಿಂದ ಬಂದವನು’, ‘ಕುಬೇರ ಶಿಕಾರಿ’, ‘ಊರಿಗೆ ಬಂದ ದೇವರು’ ಈ ಕಥೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು. ಗಾಢ ನಿರೀಕ್ಷೆಯೊಂದು ತಣ್ಣಗೆ ಹುಸಿಹೋಗುವಲ್ಲಿ ಧುತ್ತನೆ ಎದುರಾಗುವ ಕ್ರೌರ್ಯ ಅರಗಿಸಿಕೊಳ್ಳಲಿಕ್ಕೆ ಆಗದಂಥದ್ದು. ಆ ಆಘಾತವನ್ನು ಹೊತ್ತುಕೊಂಡೇ ಬದುಕು ಮುಂದುವರಿಯಲಿರುವುದರ ಸುಳಿವಿನೊಂದಿಗೆ ತಲ್ಲಣಗಳ ತೀರದಲ್ಲಿ ಓದುಗನನ್ನು ತಂದು ನಿಲ್ಲಿಸುತ್ತವೆ ಚಾಂದ್ ಅವರ ಕಥೆಗಳು.
‘ಸವೆದ ಹಾದಿಯ ಉಸಿರು’, ‘ಹೊಳೆ ದಂಡೆಯ ಆಚೆ’, ‘ಗೋಡೆಗಳನು ದಾಟಿ’ ಕಥೆಗಳು ಮತ್ತೊಂದು ಬಗೆಯವು. ಹಲವು ಯಾತನೆಗಳಲ್ಲಿ ನರಳುವ ಹಂಬಲವು ಅಂತಿಮವಾಗಿ ಗೆಲ್ಲುವುದನ್ನು ಹೇಳುವ ಈ ಕಥೆಗಳಲ್ಲಿ, ಜಂಜಡದ, ಸಂಕಟದ, ಅಪಸ್ವರಗಳ ಹಾದಿಯೇ ಉದ್ದಕ್ಕೂ ಚಾಚಿಕೊಂಡಿದೆ. ಆದರೆ ಅವನ್ನೆಲ್ಲ ದಾಟುವುದರೊಂದಿಗೆ ನಿಕ್ಕಿಯಾದ ನಿರಾಳತೆಯಲ್ಲಿ ಕಾಣಿಸುವುದು ಜೀವನಪ್ರೀತಿಯ ಪ್ರಭೆ.
‘ಕದ ತೆರೆದ ಆಕಾಶ’ ಮತ್ತು ‘ಕಂಚಿಮಳ್ಳು’ ಕಥೆಗಳು ಬಹುಮುಖ್ಯವಾದವುಗಳಾಗಿ ನನಗೆ ಕಾಣಿಸುತ್ತವೆ. ಚಾಂದ್ ಅವರು ಮತ್ತೆ ಮತ್ತೆ ಬರೆಯಬಹುದಾದ ಕಥೆಗಳ ವಿನ್ಯಾಸವೊಂದು ಈ ಎರಡು ಕಥೆಗಳಲ್ಲಿ ಮೈಗೂಡಿದೆ ಎಂಬುದು ನನ್ನ ದೃಢವಾದ ನಂಬಿಕೆ. ಇದನ್ನು ಸ್ವಲ್ಪ ವಿಸ್ತರಿಸಿ ಹೇಳುವುದಾದರೆ, ಬದುಕು, ಭಾವನೆ, ಭಾಷೆ, ವ್ಯಾವಹಾರಿಕವಾದದ್ದರ ಪೈಪೋಟಿ, ಪ್ರೀತಿ ಪ್ರೇಮದಂಥದ್ದನ್ನು ಆಕ್ರಮಿಸಿಕೊಳ್ಳಲು ಹವಣಿಸುತ್ತಿರುವ ಮತ್ತೇನೋ ಒಂದು ಇವೆಲ್ಲವನ್ನೂ ಒಳಗೊಂಡ ಇವತ್ತಿನ ಜಗತ್ತು ಮತ್ತು ಅದು ತೆಗೆದುಕೊಳ್ಳಬಹುದಾದ ಅನಿರೀಕ್ಷಿತ, ಅನಪೇಕ್ಷಿತ ತೀರ್ಮಾನಗಳಲ್ಲಿ ಏಕಕಾಲದಲ್ಲೇ ಸ್ವಾತಂತ್ರ್ಯವನ್ನು ಕೊಟ್ಟಂತೆ ಮಾಡುತ್ತ ಇನ್ನೊಂದೆಡೆಯಿಂದ ಕಸಿದುಕೊಳ್ಳುತ್ತಲೂ ಇರುವ ಚೋದ್ಯವಿದೆ. ಇಲ್ಲಿ ಒಂದು ಗಂಡು ಹೆಣ್ಣು ತಮ್ಮ ಸ್ವಾಭಿಮಾನ, ಸ್ವಂತಿಕೆ ಮತ್ತು ಸ್ವಾತಂತ್ರ್ಯವನ್ನು ಬಯಸುತ್ತ ಮತ್ತು ಘೋಷಿಸಿಕೊಳ್ಳುತ್ತಲೇ ಇವಾವುದೂ ಸಾಧ್ಯವಾಗಲು ಆಸ್ಪದವಿರದ ಶರಣಾಗತ ಸ್ಥಿತಿಯಲ್ಲಿ ಬಯಸಿ ಬಯಸಿಯೇ ಸಿಲುಕುವುದು ನಡೆಯುತ್ತದೆ. ಉದ್ವೇಗ ಮತ್ತು ಗೊಂದಲಗಳು ಅವರೊಳಗಿನ ಭ್ರಮಾಧೀನ ನಿಚ್ಚಳತೆಯ ಸೆರಗಿನಲ್ಲೇ ಅಡಗಿರುತ್ತವೆ. ಹಾಗಾಗಿ ಭ್ರಮೆ ಒಡೆದುಕೊಂಡ ಪ್ರತಿ ಬಾರಿಯೂ ಸ್ಥಿತ್ಯಂತರ. ಇಂಥ, ತೀರ್ಮಾನಗಳಿಗೆ ದೀರ್ಘಾಯಸ್ಸು ಇಲ್ಲದ ಅವಸ್ಥೆಯಲ್ಲಿ, ಬದಲಾಗುತ್ತಿರುವ ತೀರ್ಮಾನಗಳ ಜೊತೆಗಿನ ಪ್ರಯಾಣದಲ್ಲೇ ಬದುಕು ದಣಿದುಬಿಡುವಲ್ಲಿ ತೆರೆದುಕೊಳ್ಳುವ ಆಧ್ಯಾತ್ಮಿಕ ಸ್ಪರ್ಶದ ಭಾವುಕ ಸಾಧ್ಯತೆ ಹೊಸ ಕಾಲದ ವ್ಯಂಗ್ಯವೊ ತೀವ್ರತೆಯೊ ಗೊತ್ತಾಗುವುದಿಲ್ಲ.ಒಟ್ಟಿನಲ್ಲಿ ಇದು ನಿಗೂಢವಾದಂಥ ಮತ್ತು ನಿಲುಗಡೆಯಿಲ್ಲದಂತೆ ತೋರುವ ಯಾನ. ಈ ಸ್ಥಿತಿಯ ಒಳಗನ್ನು ಶೋಧಿಸಲು ಹೊರಟಂತಿರುವ ಚಾಂದ್ ಅವರು, ಈ ಎರಡು ಕಥೆಗಳಲ್ಲಿ ಕಟ್ಟಿಕೊಡುವ ಅನುಭೂತಿ ವಿಶಿಷ್ಟವಾದುದಾಗಿದೆ.
‘ಕದ ತೆರೆದ ಆಕಾಶ’ ಕಥೆಯ ಜಾಹ್ನವಿ ನಿಜವಾಗಿಯೂ ಜಾಹ್ನವಿಯಲ್ಲ ಮತ್ತು ಅವಳು ಜಾಹ್ನವಿಯಾಗಿಯೇ ಬದುಕಲು ಬಯಸುತ್ತಿದ್ದಾಳೆ ಎಂಬ ಸತ್ಯ, ಅದಕ್ಕೆ ಪ್ರತಿಯಾಗಿ ‘ಕೆಲವರು ಸುಳ್ಳುಗಳ ಹೊದಿಕೆಯಲ್ಲೇ ಬದುಕುತ್ತಿರುತ್ತಾರೆ’ ಎಂಬ ತ್ಯಾಗರಾಜನ ತಕರಾರಿನಲ್ಲಿರುವ ಸತ್ಯ ಈ ಮುಖಾಮುಖಿ ಅಪರೂಪದ್ದಾಗಿದೆ. ಅವಳು ಬಿಟ್ಟುಬಂದಿರುವ ಅವಳ ಗಂಡನ ಪರವಾಗಿ ತ್ಯಾಗರಾಜ ವಕಾಲತ್ತು ನಡೆಸುತ್ತಾನೆ ಅವಳೆದುರಿನಲ್ಲಿ. ಇದೆಲ್ಲವೂ ಎಲ್ಲರನ್ನೂ ಜಲಸಮಾಧಿ ಮಾಡಿಬಿಡುವಂತೆ ಸುರಿದ ಮಳೆಯ ನಡುವೆ ಇನ್ನೇನು ಬದುಕು ಮುಗಿದೇಹೋಯಿತು ಎಂಬ ಘಟ್ಟ ಮುಟ್ಟಿ ಕಡೆಗೂ ಬದುಕುಳಿದ ದೀರ್ಘ ನಿಟ್ಟುಸಿರಿನ ಹೊತ್ತಲ್ಲಿ ಜರುಗುತ್ತದೆ. ಇಡೀ ಕಥೆಯೇ ಒಂದು ಅಸಾಧಾರಣ ರೂಪಕವಾಗಿ ಆವರಿಸಿಕೊಳ್ಳುತ್ತದೆ. ‘ಕಂಚಿಮಳ್ಳು’ ಕಥೆ ಕೂಡ ಇಷ್ಟೇ ನಾಟಕೀಯತೆಯೊಂದಿಗೆ ತೆರೆದುಕೊಳ್ಳುತ್ತದೆ. ದೇವ್ರು ಭಟ್ಟ ಮತ್ತು ಇಂದ್ರಾಣಿ ಅಲ್ಲಿ ಬರೀ ಪಾತ್ರಗಳಲ್ಲ. ನಮ್ಮ ಗೊಂದಲ, ಮಹತ್ವಾಕಾಂಕ್ಷೆ, ಹುಚ್ಚುತನ, ಆದರ್ಶ ಮತ್ತು ಇವೆಲ್ಲವನ್ನೂ ಆಳದಲ್ಲಿ ನಿರ್ವಹಿಸುವ ಕಾಮನೆಯ ಪ್ರವಹಿಸುವಿಕೆಯಾಗಿ ದೇವ್ರು ಮತ್ತು ಇಂದ್ರಾಣಿ ವಿಸ್ತಾರಗೊಳ್ಳುತ್ತಾರೆ.
ಕುತೂಹಲದ ಸಂಗತಿಯೊಂದಿದೆ. ಏನೆಂದರೆ, ‘ಕದ ತೆರೆದ ಆಕಾಶ’ದಲ್ಲಿನಂತೆ ‘ಕಂಚಿಮಳ್ಳು’ ಕಥೆಯಲ್ಲೂ ಮಳೆ ಬರುತ್ತದೆ. ಮೊದಲನೆಯದರಲ್ಲಿ ದುರಂತವನ್ನೇ ತರುತ್ತದೆ ಎನ್ನಿಸಿ ಆತಂಕ ಸೃಷ್ಟಿಸುವ ಮತ್ತು ಅದೇ ವೇಗದಲ್ಲೇ ಎದುರಾಗುತ್ತಿರುವ ಅಂತ್ಯಕ್ಕೆ ಸಜ್ಜುಗೊಳಿಸುವ ಮಳೆ; ಎರಡನೆಯದರಲ್ಲಿ ಶಾಲೆಯ ಗೋಡೆಯ ಮೇಲೆ ದೇವ್ರು ಬರೆದ ಇಂದ್ರಾಣಿಯ ಚಿತ್ರವನ್ನು ಅಳಿಸುವ ಮೂಲಕ ತೀರಾ ಕೌಟುಂಬಿಕವಾದದ್ದೊಂದು ಅನಗತ್ಯವಾಗಿ ಜನರ ಬಾಯಿಗೆ ಬೀಳುವುದನ್ನು ತಪ್ಪಿಸುವ ಮಳೆ. ಬದುಕನ್ನು ಹದಗೊಳಿಸುವ ಒಂದು ಶಕ್ತಿಯಂತೆ ಮಳೆ ವ್ಯಕ್ತಗೊಳ್ಳುತ್ತದೆ ಇಲ್ಲಿ.
ಗಂಡು ಹೆಣ್ಣಿನ ನಡುವಿನ ಸಂಬಂಧ ಮತ್ತು ದಾಂಪತ್ಯದ ಬಿಕ್ಕಟ್ಟುಗಳನ್ನು ಸಶಕ್ತವಾಗಿ ಚಾಂದ್ ಕಥನಿಸಬಲ್ಲರು ಎಂಬುದಕ್ಕೂ ‘ಕದ ತೆರೆದ ಆಕಾಶ’ ಮತ್ತು ‘ಕಂಚಿಮಳ್ಳು’ ಕಥೆಗಳು ಋಜುವಾತಿನಂತಿವೆ. ‘ನೀವು ಜಾಹ್ನವಿ ಅಲ್ಲ, ಅಹಲ್ಯಾ ಅನ್ನುವುದನ್ನು ಸಾಬೀತು ಮಾಡುವ ತಾಕತ್ತು ಈ ಎಡಗಾಲಿನ ಗೆಜ್ಜೆಗಿದೆ. ನಿಮ್ಮ ಆಕರ್ಷಕ ಕಣ್ಣುಗಳು ಗೆಜ್ಜೆಗೆ ರಿದಂ ಕೊಡುವುದನ್ನು ನಿಲ್ಲಿಸಿರಬಹುದು. ಒಬ್ಬ ಈಶ್ವರ ಪ್ರಸಾದ ತಪಸ್ವಿ ಆ ರಿದಂನಲ್ಲೇ ಬದುಕುತ್ತಿದ್ದಾನೆ. ಒಬ್ಬ ನೃತ್ಯಗಾತಿ ಅಹಲ್ಯಾ ಆತನ ಕೋಣೆಗಳಲ್ಲಿ ಇನ್ನೂ ಜೀವಂತವಾಗಿದ್ದಾಳೆ’ ಎಂಬ ತ್ಯಾಗರಾಜನ ಮಾತಿನಲ್ಲಿ ದಾಂಪತ್ಯದ ಒಂದು ಇತಿಹಾಸವೇ ಪ್ರಜ್ವಲಿಸುತ್ತಿದೆ. ಆದರೆ ‘ಒಂದು ಸ್ಪರ್ಶದಲ್ಲಿರುವ ಪ್ರೀತಿಯ ಜೀವಂತಿಕೆಯನ್ನು ಅನುಭವಿಸಲಾರದಷ್ಟು ದೂರ ಸರಿದು ಬಂದಿದ್ದೇನೆ’ ಎಂದು ಒಪ್ಪಿಕೊಳ್ಳುವ ಜಾಹ್ನವಿ ಅಲಿಯಾಸ್ ಅಹಲ್ಯಾ ಅನುಭವಿಸುತ್ತಿರುವ ಸಂಘರ್ಷ ಕೂಡ ಅದೇ ದಾಂಪತ್ಯದ ಕಥೆಯನ್ನು ಮತ್ತೊಂದು ಮಗ್ಗುಲಿಂದ ಬಿಡಿಸಿಡುತ್ತಿದೆ. ‘ಸಂಬಂಜಕ್ಕಿಂತ ಬದುಕು ದೊಡ್ಡದು ದೇವ್ರು. ಸಂಬಂಜದ ಗಂಟುಗಳೊಳಗೆ ಸಿಕ್ಕಾಕೊಂಡ್ರೆ ಅದರಾಚೆಗಿನ ಬದುಕು ಕಾಣ್ತಿಲ್ಲೆ. ನೀ ಊರೊಳಗಿನ ದೇವರನ್ನು ನಂಬಿಕೊಂಡಂವಾ. ನಾ ಅದರಾಚೆಗಿನ ಜೀವ್ನಾ ಕಾಣವು’ ಎಂದು ಹೇಳಿ ಅವನನ್ನು ಮದುವೆಯಾಗುವುದರಿಂದ ತಪ್ಪಿಸಿಕೊಂಡು ಹೋಗಿದ್ದ ಇಂದ್ರಾಣಿ, ಅದೇ ದೇವ್ರು ಸಾರ್ವಜನಿಕ ಸ್ಥಳದಲ್ಲಿ ಬರೆದ ತನ್ನ ಚಿತ್ರದ ಕಾರಣದಿಂದಾಗಿ ವಾಪಸಾಗುತ್ತಾಳೆ. ‘ಎಲ್ಲ ಸಂಬಂಜಕ್ಕೂ ಮನಸ್ಸೂ ಅಂತ ಇರ್ತಿಲ್ಲೆ’ ಎನ್ನುತ್ತಿದ್ದ ದೇವ್ರು ಹಾಗೆ ತನ್ನೊಳಗಿನ ಇಂದ್ರಾಣಿಯನ್ನು ಹೂಬೇಹೂಬು ಬರೆದದ್ದು ಒಂದು ಬೆರಗಿನಂತೆ ಕಾಡುತ್ತದೆ. ಇವೆಲ್ಲದರ ಮೂಲಕ ಚಾಂದ್ ಅವರು ಸಂಬಂಧಗಳ ಸೂಕ್ಷ್ಮತೆ, ನಿಗೂಢತೆ, ವೈರುದ್ಧ್ಯಗಳನ್ನು ಮತ್ತು ಇದೆಲ್ಲದಕ್ಕಿಂತ ಹೆಚ್ಚಾಗಿ ನಿಷ್ಕಾರಣ ಪ್ರೀತಿಯ ಶಕ್ತಿ ಮತ್ತು ಸಂಕಟಗಳನ್ನು ಧ್ಯಾನಿಸುತ್ತಾರೆ.
ಚಾಂದ್ ಅವರು ಕಥೆಗಾರಿಕೆಯನ್ನು ಗಂಭೀರವಾಗಿ ತೆಗೆದುಕೊಂಡವರು ಎಂಬುದನ್ನು ಆರಂಭದಲ್ಲೇ ಹೇಳಿದೆ. ಕಥೆ ಸುಲಭವಾಗಿ ದಕ್ಕಿಬಿಡಬೇಕು ಎಂಬ ಆತುರವಾಗಲಿ, ಸುಲಭದಲ್ಲೇ ದಕ್ಕುತ್ತದೆ ಎಂಬ ಭ್ರಮೆಯಾಗಲಿ ಅವರಿಗೆ ಇಲ್ಲ. ಕಥನದ ಹೊಳಹುಗಳಿಗಾಗಿ ಕಾಯುವ ಚಾಂದ್, ಕಥೆ ಹೇಳಲು ತುಸು ದುರ್ಗಮವೆನ್ನಿಸುವಂಥ ಹಾದಿಯನ್ನು ಆಯ್ದುಕೊಳ್ಳುತ್ತಾರೆ. ಹಾಗಾಗಿಯೇ ಅವರ ಕಥೆಗಳಲ್ಲಿ ಗದ್ದಲವಿಲ್ಲ. ಎಂಥ ಅಬ್ಬರವನ್ನೂ ತಣ್ಣಗಿನ ತನ್ಮಯತೆಯಲ್ಲೇ ಹೇಳಿಬಿಡುವ ಅವರ ಧಾಟಿಗೆ ಕಡಲಿನೆದುರು ನಿಂತವನ ದೃಢತೆ ಮತ್ತು ನಿರ್ದಾಕ್ಷಿಣ್ಯ ಮನಃಸ್ಥಿತಿಯಲ್ಲಿ ಏರ್ಪಡುವ ಉಲ್ಲಂಘನೆಯ ಗುಣ ಇದೆ. ಹೊಸ ಕಾಲವು ಕೇಳುತ್ತಿರುವ ಕಥೆಗಳನ್ನು ಕಾಣಬಲ್ಲ ಬಿಂದುವನ್ನು ಗಳಿಸಿಕೊಳ್ಳಬಲ್ಲವರಾಗಿದ್ದಾರೆ ಅವರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ